Friday, November 22, 2013

ನಿಸರ್ಗ  


ಮನುಜನಿಗಿದು ನೀ ಕೊಟ್ಟ ವರ
ಭೂಮಿಗೊಲಿದ ಮಧುರ ಸ್ವರ 
ನಮಗಿರೊವುದೊಂದೇ ಕಣಜ 
ಅದನಾರಿಯಬೇಕು ನೀ ಮನುಜ. 

ಕೊನೆಗಾಣಿಸಿ ಅವನು ವನ ಐಸಿರಿ
ಕಟ್ಟಿಕೊಂಡಿಹನು ತನೆಗೆ ತಾನೇ ಗೋರಿ
ಮಾಡಿ ಜೀವ ಜಂತು ಗಳ ಕೊಲೆ
ತಿಳಿದವಗೆ ಇದರ ಬೆಲೆ.

ಅಳಿಸದಿರು ನಿಸರ್ಗದ ಮಂದಹಾಸ
ತೋರದಿರು ಅದರ ಮೇಲೆ ನಿನ್ನ ಅಟ್ಟಹಾಸ
ಕೊನೆಗಾಣಿಸದಿರು ಅವಳ ಸುಂದರ ಛಾಯೆ 
ತೊಲಗಿಸು ತಾಯೆ ಅವನಿಂದ ಈ ಮಾಯೆ.

ಬೆಳೆಸೋಣ ಬನ್ನಿ ನಾವೆಲ್ಲರೂ ಸೀರಿ
ವನವೇ ಸಂಪ್ತಾತು ಆದ ನೀ ಆರಿ
ಸುತ್ತಲೂ ಆವರಿಸಿದರೆ ನಿಸರ್ಗ
ನೀ ಕಂಡು ಸವಿದರೆ ಅದೇ ಸ್ವರ್ಗ..

ಮರಗಳ ಬೆಳೆಸಿ .. ನಮ್ಮ ಪೀಳೀಗೇಯ ಉಳಿಸಿ...

Monday, November 18, 2013

ಬಾಯಾರೇಕೆ ನೀಗುವ ಮುನ್ನವೇ ಮಳೆ ನಿಂತು ಹೂಗಿತ್ಹು...
ನಿನ್ನ ನೆನಪನ್ನು ಮೆಲುಕು ಹಾಕುತಿದ್ದೆ....
ನಿದ್ದೆ ಬರುವ ಮುನ್ನವೇ ರಾತ್ರಿ ಕಳೆದು ಹೋಗಿತು..
ಸಂಜೆಯ ತಂಗಾಳಿ, ತೇಲಿ ಬಂದ ಪರಿಮಳ, 
ಮುಂಗುರುಳ ನರ್ತನ, ಕೈ ಹಿಡಿದು ನೆಡೆಸುವಂತೆ...., 
ಇನಿಯಾನೊಬ್ಬನಿದ್ದಾನೆ!!

ಒಬ್ಬಳೇ ಕೂತಾಗ ಮನ ಸೋತಾಗ, 
ನೊಂದು ಕಂಬನಿ ಹರಿಸಿದಾಗ, ಬಂದು ಕಣ್ಣೊರಸಿ ನಗಿಸುವಂತೆ..,
ಗೆಳೆಯನೊಬ್ಬನಿದ್ದಾನೆ!!

ನನ್ನ ನಿದ್ದೆಯಲಿ ಬಣ್ಣ ಬಣ್ಣದ ಕನಸು ಚೆಲ್ಲಿ,
ಅವನ ತೋಳ ಚಾಚಿ, ಲಾಲಿ ಹಾಡಿ, ಮಲಗಿಸುವಂತೆ..,
ನಲ್ಲನೊಬ್ಬನಿದ್ದಾನೆ!!

ಸುಮ್ಮನೆ ಕೂತಾಗ ಮಾತನಾಡಿಸಿ, ಹೋದಲೆಲ್ಲಾ ಹಿಂಬಾಲಿಸುತ್ತಾ.
ಕೋಪ ಬಂದಾಗ ಸಂತ್ವನಿಸುತ್ತಾ, ಗೆಳೆಯನೊಬ್ಬನಿದ್ದಾನೆ,
ನನ್ನೋಡನೆಯೆ...ನನ್ನೊಳಗೆಯೇ ಅವಿತ ಒಡೆಯನೊಬ್ಬನಿದ್ದಾನೆ!!!

Thursday, August 23, 2012

maLe

ಹಸಿರ ತುಂಬಿಸಿ ಮರವೆಲ್ಲ,
ಹೂಗಳ ನಗಿಸಿ ಗಿಡದಲ್ಲೆಲ್ಲ,
ಮಣಿನ ಕಂಪು ಊರೆಲ್ಲ, 
ಸೊಗಸಿದು ಹಳ್ಳಿಯ ಮಳೆ... 

ರೊಚ್ಚೆಯ ಮೆತ್ತಿಸಿ ಕಾಲೆಲ್ಲಾ,
ಚರಂಡಿಯ ನೀರು ಹೊರಗೆಲ್ಲ,
ಕೊಚ್ಚೆಯೇ ತುಂಬಿದೆ ಊರೆಲ್ಲ,  
ಯಾತನೆ ಇದು ಪೇಟೆಯ ಮಳೆ..


Thursday, October 6, 2011

BAALYA

ತಿರುಗಿ ನೋಡ ಬಯಸಿದೆ ಮನಸು,
ನಾ ಬಂದ ದಾರಿಯ-ನನಗರಿಯದಂತೆ,
ತಿರುಗಿ ನೋಡ ಬಯಸಿದೆ ಮನಸ್ಸು..

ಅಂಗಳದ ರಂಗವಲ್ಲಿ, ಹಾರುತಿಹ ಗಾಳಿಪಟ,
ಪುಟ್ಟದಾದ ಲಂಗ ಕುಪ್ಪಸ- ಎಲ್ಲ ನೆನೆಪು
ನೋಡ ಬಯಸಿದೆ ಮನಸು
ಮತ್ತೆ ಬೇಕಿನಿಸಿದೆ ಆ ವಯಸು..

ತುತ್ತಿಡುವ ಅಮ್ಮ, ಆಡಿಸುವ ಅಪ್ಪ, 
ಬೆತ್ತ ಹಿಡಿದ ಮೇಸ್ಟ್ರ, ಕಥೆ ಹೇಳುವ ಅಜ್ಜಿ- ಎಲ್ಲ ನೆನೆಪು
ನೋಡ ಬಯಸಿದೆ ಮನಸು
ಮತ್ತೆ ಬೇಕಿನಿಸಿದೆ ಆ ವಯಸು..

ಬರಿಯ ಹೋರಾಟದ ಬದುಕು - ಸಾಕೆನಿಸಿ
ಬಯಸಿದೆ ಮನವು ನೆಮ್ಮದಿಯ,
ಮಲಿನವಾದ ಜೀವನವು- ಸಾಕೆನಿಸಿ
ಹುಡುಕ ಹೊರಟಿದೆ ಮನವು- ಹೊಸತನವ..

ARPANAE: NANNA KANNADA NADIGE

ಜಯ ಜಯ ಈ ನಾಡಿಗೆ
ಕರುನಾಡ ತಾಯಿ ಭುವನೇಶ್ವರಿಗೆ..


ಕನ್ನಡ ನಾಡಿದು ಧಾನ್ಯದ ನೆಲ,
ಇಲ್ಲಿ ಜನಿಸಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ,
ಕನ್ನಡಾಂಬೆಯ ಮಾಡಿಲ್ಲಲ್ಲಿರುವ ಈ ಬಾಲ,
ಸಿಗಲಾರದು ಬೇರೆಲ್ಲೂ ಈ ಛಲ..


ಸತ್ಯ ಅಹಿಂಸದಿಂದ ಮೆರೆದ ನಾಡಿದು,
ಸಂಯಮ ಶೀಲರ ಪುಣ್ಯದ ಬೀಡಿದು.
ಗಂಧದ ಗುಡಿದು, ನಮ್ಮ ತವರೂರಿದು,
ಹಾಲ್ಜ್ಜೆನು ಹರಿಯುವ ನಾಡಿದು ನಮ್ಮದು..


ಕನ್ನಡದ ಕೀರ್ತಿಯನ್ನು ಎಲ್ಲೆಡೆಗೆ ಸಾರಿರಿ..
ಕನ್ನಡದ ಕಂಪನ್ನು ಎಲ್ಲೆಡೆಗೆ ಬೀರೀರಿ,
ನಮ್ಮ ತಾಯ್ನಾಡಿಗೆ ಶುಭ ಗೀತೆಯ ಹಾಡಿರಿ..
ಕನ್ನಡಾಂಬೆಗೆ ಐಕ್ಯ-ದಾರತಿಯ ಬೆಳಗಿರಿ..


ಈ ನಾಡ ಮಣ್ಣಲ್ಲಿ ಬೆಳೆದ ವೀರ ಮಕ್ಕಳೇ ಎಳೀರೀ
ನಮ್ಮ ತಾಯ ಸೇವೆಯ ಗೈಯುವ ಬನ್ನಿರಿ..
ಕನ್ನಡವ ಉಳಿಸಿರಿ, ಕನ್ನಡವ ಬೆಳೆಸಿರಿ, ಕನ್ನಡಾಂಬೆಯ ಗೆಲಿಸಿರಿ...

NEE NANNAVANALLA

ತಿಳಿದಿಹೆನು ನಾನು...
ನೀ ನನ್ನವನಲ್ಲಾ..
ನನಗೇನು ಅಲ್ಲ..
ಆದರೆ ಸ್ನೇಹವೆಂಬ ಸುಧೆ,
ಕರೆಸಿತು ಹತ್ತಿರ,
ಬೆಳೆಸಿತು ಹೃದಯದಲಿ,
ಪ್ರೀತಿಯೆಂಬ ಅಂಕುರ....
ಬಲ್ಲೆಯಾದರೆ ನಾನು-
ಇದು ಮಾತ್ರ ಅಮರ....