Tuesday, April 21, 2020

ಮನಸುಗಳ ಮಿಲನ ಒಂದು ಕಡೆ , 
ಮುರಿದಾವು ಹಲವೆಡೆ , 
ಕೂಡಿ ಬಾಳುವ ಸಡಗರ ಎಲ್ಲರದು ...
ಸಂಸಾರವೇ ಇಲ್ಲದ ನೋವು ಹಲವರದು ...


ಹಸಿದ ಕಂಗಳು ಒಂದೆಡೆ , 
ದಿಕ್ಕು ತೋಚದೆ ಓಡುತಿರುವ ಕಾಲುಗಳು ಮತ್ತೊಂದೆಡೆ , 
ನಾಳೆಯ ಚಿಂತೆ ಕೆಲವರದು ...
ನಾಳೆಯನ್ನೇ ಕಾಣದ ಜೀವ ಹಲವರದು ...

ಮಾಲಿನವಿಲ್ಲದೆ ಹರಿಯುತಿಹುದು ನದಿಗಳು, 
ಗಗನದಲ್ಲಿ ರೆಕ್ಕೆ ಬಿಚ್ಚಿ ಉತ್ಸಾಹದಿಂದ 
ಹಾರಡುತ್ತಿರುವ ಹಕ್ಕಿಗಳು, 
ನಲಿಯುತಿಹುದು ಕಾನನ , 
ಉಸಿರಾಡುತಿಹಳು ಧರೆ ... 

ಸ್ತಬ್ಧ ಎಲ್ಲಾ ಸ್ತಬ್ಧ..
ಕರೊನಾದ ಕಾರ್ಮೋಡ ಕರಗುವ ತನಕ ಎಲ್ಲಾ ನಿಶಬ್ಧ 

ನಮಿಸೋಣ ದೇವರಿಗೆ 
ದೇವರಂತಿರುವವರಿಗೆ 🙏🙏🙏
ಹಿಡಿಯೋಣ ಬೀಳುತಿರುವ ಕೈಗಳನು ... 
ಹೆಗಲು ಕೊಡೋಣ ಕಂಬನಿಯ ಕಂಗಳಿಗೆ ..
ಹಂಚೋಣ ಪ್ರೀತಿ , ಪರಿತಪಿಸುತಿರುವ ಹೃದಯಗಳಿಗೆ.. 

ವಿದು ❤️

Saturday, January 11, 2020



ನನ್ನ ಕಂಗಳು ... 


ರಾತ್ರಿಯೆಲ್ಲ ನಿನ್ನ ಕನಸನ್ನು ಹೊತ್ತು , 
ನಿದ್ದೆ ಮಾಡದೆ ನಿನಗಾಗಿ ಕಾದು ಕುಳಿತು,
ದಿನವಿಡಿ ನಿನ್ನ ಹುಡುಕಾಡಿ , 
ಸೋತಿಹುದು ನನ್ನ ಕಂಗಳು ನಿನ್ನನ್ನೇ ನೆನೆದು❣️


                                ಗೆಜ್ಜೆಗಳು

ಹುಚ್ಚೆದ್ದು ಕುಣಿಯುತಿತ್ತು ನನ್ನ ಕಾಲಿನ ಗೆಜ್ಜೆಗಳು.
ಹೊಳೆಯುತ್ತಿದೆ ನಕ್ಷತ್ರದಂತೆ ನನ್ನ ಕಾಲ್ನಡಿಗೆಯಲ್ಲಿ,
ಅಮ್ಮನ ಪ್ರೀತಿಯ ನೆನಪಿನ ಕಾಣಿಕೆ, 
ಅವಳ ಪ್ರೀತೀಯ ಉಡಿಗೆ... 
ಗೆಜ್ಜೆ ಕಾಲುಂಗುರವಲ್ಲವೇ ಹೆಣ್ಣಿನ ನೆಚ್ಚಿನ ಆಭರಣ 
ಅದರ ಘಲ್ಲು ನಾದವಲ್ಲವೇ ಇನಿಯನಿಗೆ ಮಧುರ ಗಾನ.. ❤️

Flaunting my new Anklets #anklets  #jewellery #feetography #feetselfie 


ಒಲವಿನ ಗೆಳೆಯನೇ ನಿನಗೆ ಕೈ ಮುಗಿವೆ .


ನಿಮ್ಮ ಪ್ರೇಮವೋ , ಅತಿಯಾದ ಒಲವೋ ,
ನಿಮ್ಮ ಸವಿಮತೋ,ನಿಮ್ಮ ಮಗುವಿನಂತ ಮನಸೋ?? 
ಸೆರೆಯಾಗಿ ಹೋದೆ ನಿಮ್ಮ ತೋಳ ತೆಕ್ಕೆಯಲಿ 
ಮರೆಯಾಗಿದೆ ಜಗವೆಲ್ಲ ನಿಮಾದೊಂದೇ ಧ್ಯಾನದಲಿ...

                                 ಇರುಳೆಲ್ಲ ಕಾಡುವ ಕನಸು ,
                                 ನಿಮ್ಮನ್ನಗಲಿ ಬಾರದ ನನ್ನ ಮನಸು ...
                                 ಹೃದಯದಲ್ಲೇ ಉಳಿಯುವ ಮಾತುಗಳು 
                                 ಒಂದೆರಡು ನಿಮಿಷವಾದರೂ ನಿನ್ನ ನೋಡ ಬಯಸುವ ನನ್ನ ಕಣ್ಣುಗಳು..


ಇನಿಯ ... ನನ್ನ ಜೇವದ ಗೆಳೆಯ 
ನೀನೆ ನನ್ನ ಬಾಳ ಬಂಗಾರ 
ನಿನ್ನ ನೆನೆಪೇ ನನಗಾಧಾರ...

Wednesday, January 6, 2016


ದೇಶ  ನಮ್ಮ ತಾಯಿ ಎಂದು
ಹೊರಡುವ ಯೋಧರೇ ..
ದೇಶಕಾಗಿ ಪ್ರಾಣ ತೆತ್ತು
ನಮ್ಮ ಕಾಯುವ ವೀರರೇ... ನಿಮಗಿದೋ ನಮ್ಮ ನಮನ..

ಕರುಳ ಕೊರೆವ  ಚಳಿಯಲಿ, ಮೈಯ ಸುಡುವ ಬಿಸಿಲಲಿ
ವೈರಿಗಳ ನಾಶವೇ ಗುರಿಯೆಂಬ ಛಲದಲಿ
ಪ್ರಾಣವನ್ನು ಮೀಸಲಿಟ್ಟು ತಾಯ್ನಾಡ ಮಡಿಲಲಿ
ನೊಂದು ಬೆಂದು ಕಾಯುವ
ವೀರ ಯೋಧರೇ...  ನಿಮಗಿದೋ ನಮ್ಮ ನಮನ...

ತಾಯಿ, ಮನೆ, ಮಡದಿ, ಮಕ್ಕಳನ್ನು ತೊರೆದು,
ದೇಶವೇ ಪ್ರಾಣವೆಂದು ಹಗಲು ಇರುಳು ದುಡಿದು..
ಶರ್ತೃಗಳ ಅಟ್ಟಹಾಸವನ್ನು ಮೆಟ್ಟಿ  ಮೆರಿದು..
ಕೆಚ್ಚದೆಯಲಿ ನಮ್ಮ ಕಾಯುವ
ವೀರ ಯೋಧರೇ... ನಿಮಗಿದೋ ನಮ್ಮ ನಮನ.

Wednesday, October 21, 2015

ಬೆಳೆ  ಇಲ್ಲ  -ರೈತರಿಗೆ  
ಬದುಕಲು  ನೆಲೆ  ಇಲ್ಲ  
ಹಗಲೆಲ್ಲ  ಇರುಳೆಲ್ಲ  ದುಡಿದರು  
ಅವರಿಗೇ ಕೂಳಿಲ್ಲ... 
ದಿನವೆಲ್ಲ ಬೆವರು  ಸುರಿದರು 
ಮುಖದಲ್ಲಿ  ಜೀವದ  ಕಳೆ ಇಲ್ಲ,
ಸಾಲದ  ಶೂಲವು  ಕೊರಳಿಗೆ  ಬಿದ್ದರು  
ಮೃತ್ಯು  ದೇವತೆಗೆ  ಕರುಣೆ ಇಲ್ಲ. 
ಹೊರಳುತ್ತ, ನರಳುತ್ತ, ತಳಮಳಿಸುತ್ತ  
ಜೀವವು ಬೆಂದರು,
ಮರಣದ  ಬೆಳಕು ಕಾಣಲಿಲ್ಲ, 
ಬದುಕಲು ಆಸೆಯಿಲ್ಲ -- ವಿಧು 

ಅನ್ನದಾತರು  ಸಾಯುತಿದ್ದರೆ .. ಮoದೋoಮ್ಮೆ  ಕುಡಿಯುವ  ನೀರು  ಕಲುಷಿತ , ಉಸಿರಾಡುವ  ಗಾಳಿ  ಕಲುಷಿತ,ದುಡಿಯಲು  ರೈತನಿರುವುದಿಲ್ಲ  ಆಗ ಕೂತು ನಮ್ಮ  ಬೆಳ್ಳಿ -ಬಂಗಾರ , ದುಡನ್ನು ತಿನ್ನಲಾದಿತೆ? ಏಚೆತ್ತುಕೊಳ್ಳಿ . 
ತoಪದವೋ ಎಲ್ಲಾ ತoಪದವೋ.... 
ಧಗೆಯಿಂದ ಸುಡುತ್ತಿದ  ಧರೆಯೆಲ್ಲ , 
ಒಣಗಿದ್ದ  ಗಿಡ ಮರ, ಹೋಬಳ್ಲಿಗಳೆಲ್ಲ .... ಹಸಿರದವೋ ! 
ಹಸಿರ  ಹಾಸಿಗೆಯಂತೆ  ಭುವಿಯೆಲ್ಲ  ನಗುತವೆ , 
ನದಿಗಳು ಝುರಿಗಳು ಕುಣಿಯುತ್ತ  ಹರಿದಾವೆ..
ಮಳೆರಾಯ ನೀ ಬಂದು ಇಳೆಯೆಲ್ಲ ಮುದ್ದಿಸಿ ಲಾಲಿಸಿ ಹೋದಾಗ ,
ಹಸಿರದವೋ  ಎಲ್ಲಾ ಹಸಿರದವೋ.... 
ತoಪದವೋ ಎಲ್ಲಾ ತoಪದವೋ...