ಮಕ್ಕಲ್ಲಿದ್ದರವ್ವ ಮನೆ ತುಂಬಾ ,
ಎಲ್ಲಿ ಹುಡುಕಲಿ ??
ಹಸಿದ ಹೊಟ್ಟೆ .. ನೀರಿನ ದಾಹ ,
ಯಾರ ಕೇಳಲಿ??
ಕಾಲಿಟ್ಟಲೆಲ್ಲ ಬೆಂಕಿ ,
ಎಲ್ಲಿ ಓಡುವುದು...
ದಾಹ ,ಕೂಗು,ಸಂಕಟ, ಹಸಿವು ..
ಯಾರ ಮೊರೆ ಹೋಗುವುದು??
ಸುಟ್ಟು ಕರಕಲಾಯಿತು ನಮ್ಮ ಮನೆ ...
ಸ್ಮಶಾನವಾಯಿತು ಭಸ್ಮವಾಯಿತು ನಮ್ಮ ಮನೆ ...
ಉರಿಯದಿರು ಬೆಂಕಿಯೇ ,
ಬಿಸದಿರು ಗಾಳಿಯೇ ..
ಬಾರೂ ಒಮ್ಮೆ ಮಳೆರಾಯ
ತಣಿಸೋಮ್ಮೆ ಇಳೆಯ ..
-vidu
ಇದೆ ಅಲ್ಲವೇ ಪ್ರಾಣಿಗಳ ಆರ್ತನಾದ..
ವನ್ಯ, ಪ್ರಾಣಿ ಪಕ್ಷಿಗಳಿಂದ ಶ್ರೀಮಂತ ವಾಗಿದ್ದ ನಮ್ಮ
ಬಂಡೀಪುರ ಅಭಯಾರಣ್ಯದಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ 5 ಸಾವಿರ ಎಕರೆಗೂ ಅಧಿಕ ಅರಣ್ಯ ಪ್ರದೇಶ ನಾಶವಾಗಿದೆ..
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆಯ ಬರೆಕಟ್ಟೆ ಹಾಗೂ ಗುಡ್ಡಕೆರೆ ಬೆಟ್ಟಗಳಲ್ಲಿ ಕಾಣಿಸಿಕೊಂಡ ಬೆಂಕಿ ಹಿಮವದ್ ಗೋಪಾಲ ಸ್ವಾಮಿ ವಲಯದವರೆಗೂ ಹರಡಿದೆ. ಸುಮಾರು 8 ಕಿ.ಮೀ. ವ್ಯಾಪ್ತಿಯಲ್ಲಿ ಬೆಂಕಿ ಹಬ್ಬಿದೆ. ಬೆಂಕಿಯ ಈ ರುದ್ರನರ್ತನಕ್ಕೆ ಅಪಾರ ವನ್ಯಸಂಪತ್ತು ಸುಟ್ಟು ಭಸ್ಮವಾಗಿದೆ.. ಸೂರಿಲ್ಲದ ಪ್ರ್ರಾಣಿಗಳು, ನೀರು , ಅಹಾರವಿಲ್ಲದೆ ಎಲ್ಲಿ ಪರಿತಪಿಸುವುದೋ.. ಬೆಂಕಿಯ ಈ ಅನಾಹುತ ನೋಡಿದರೆ ಎಂಥವರಿಗೂ ಕರುಳು ಕಿತ್ತು ಬರುತ್ತದೆ .. ಮಳೆರಾಯ ಬಂದ್ದೋಮ್ಮೆ ಇಳೆಯ ತಣಿಸಯ್ಯ..