Thursday, August 4, 2022

ಕಾಡ್ಗಿಚ್ಚು

ಮಕ್ಕಲ್ಲಿದ್ದರವ್ವ ಮನೆ ತುಂಬಾ , 

ಎಲ್ಲಿ ಹುಡುಕಲಿ ?? 

ಹಸಿದ ಹೊಟ್ಟೆ .. ನೀರಿನ ದಾಹ ,

ಯಾರ ಕೇಳಲಿ?? 


ಕಾಲಿಟ್ಟಲೆಲ್ಲ ಬೆಂಕಿ , 

ಎಲ್ಲಿ ಓಡುವುದು... 

ದಾಹ ,ಕೂಗು,ಸಂಕಟ, ಹಸಿವು .. 

ಯಾರ ಮೊರೆ ಹೋಗುವುದು?? 

 

ಸುಟ್ಟು ಕರಕಲಾಯಿತು ನಮ್ಮ ಮನೆ ...

ಸ್ಮಶಾನವಾಯಿತು ಭಸ್ಮವಾಯಿತು ನಮ್ಮ ಮನೆ ... 


ಉರಿಯದಿರು ಬೆಂಕಿಯೇ ,

ಬಿಸದಿರು ಗಾಳಿಯೇ ..

ಬಾರೂ ಒಮ್ಮೆ ಮಳೆರಾಯ

ತಣಿಸೋಮ್ಮೆ ಇಳೆಯ .. 

-vidu 

ಇದೆ ಅಲ್ಲವೇ ಪ್ರಾಣಿಗಳ ಆರ್ತನಾದ.. 

ವನ್ಯ, ಪ್ರಾಣಿ ಪಕ್ಷಿಗಳಿಂದ ಶ್ರೀಮಂತ ವಾಗಿದ್ದ ನಮ್ಮ

ಬಂಡೀಪುರ ಅಭಯಾರಣ್ಯದಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ 5 ಸಾವಿರ ಎಕರೆಗೂ ಅಧಿಕ ಅರಣ್ಯ ಪ್ರದೇಶ ನಾಶವಾಗಿದೆ.. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆಯ ಬರೆಕಟ್ಟೆ ಹಾಗೂ ಗುಡ್ಡಕೆರೆ ಬೆಟ್ಟಗಳಲ್ಲಿ ಕಾಣಿಸಿಕೊಂಡ ಬೆಂಕಿ ಹಿಮವದ್ ಗೋಪಾಲ ಸ್ವಾಮಿ ವಲಯದವರೆಗೂ ಹರಡಿದೆ. ಸುಮಾರು 8 ಕಿ.ಮೀ. ವ್ಯಾಪ್ತಿಯಲ್ಲಿ ಬೆಂಕಿ ಹಬ್ಬಿದೆ. ಬೆಂಕಿಯ ಈ  ರುದ್ರನರ್ತನಕ್ಕೆ ಅಪಾರ ವನ್ಯಸಂಪತ್ತು ಸುಟ್ಟು ಭಸ್ಮವಾಗಿದೆ.. ಸೂರಿಲ್ಲದ ಪ್ರ್ರಾಣಿಗಳು, ನೀರು , ಅಹಾರವಿಲ್ಲದೆ ಎಲ್ಲಿ ಪರಿತಪಿಸುವುದೋ.. ಬೆಂಕಿಯ ಈ ಅನಾಹುತ ನೋಡಿದರೆ ಎಂಥವರಿಗೂ ಕರುಳು ಕಿತ್ತು ಬರುತ್ತದೆ .. ಮಳೆರಾಯ ಬಂದ್ದೋಮ್ಮೆ ಇಳೆಯ ತಣಿಸಯ್ಯ.. 

No comments:

Post a Comment