ಬೆಳೆ ಇಲ್ಲ -ರೈತರಿಗೆ
ಬದುಕಲು ನೆಲೆ ಇಲ್ಲ
ಹಗಲೆಲ್ಲ ಇರುಳೆಲ್ಲ ದುಡಿದರು
ಅವರಿಗೇ ಕೂಳಿಲ್ಲ...
ದಿನವೆಲ್ಲ ಬೆವರು ಸುರಿದರು
ಮುಖದಲ್ಲಿ ಜೀವದ ಕಳೆ ಇಲ್ಲ,
ಸಾಲದ ಶೂಲವು ಕೊರಳಿಗೆ ಬಿದ್ದರು
ಮೃತ್ಯು ದೇವತೆಗೆ ಕರುಣೆ ಇಲ್ಲ.
ಹೊರಳುತ್ತ, ನರಳುತ್ತ, ತಳಮಳಿಸುತ್ತ
ಜೀವವು ಬೆಂದರು,
ಮರಣದ ಬೆಳಕು ಕಾಣಲಿಲ್ಲ,
ಬದುಕಲು ಆಸೆಯಿಲ್ಲ -- ವಿಧು