Tuesday, April 21, 2020

ಮನಸುಗಳ ಮಿಲನ ಒಂದು ಕಡೆ , 
ಮುರಿದಾವು ಹಲವೆಡೆ , 
ಕೂಡಿ ಬಾಳುವ ಸಡಗರ ಎಲ್ಲರದು ...
ಸಂಸಾರವೇ ಇಲ್ಲದ ನೋವು ಹಲವರದು ...


ಹಸಿದ ಕಂಗಳು ಒಂದೆಡೆ , 
ದಿಕ್ಕು ತೋಚದೆ ಓಡುತಿರುವ ಕಾಲುಗಳು ಮತ್ತೊಂದೆಡೆ , 
ನಾಳೆಯ ಚಿಂತೆ ಕೆಲವರದು ...
ನಾಳೆಯನ್ನೇ ಕಾಣದ ಜೀವ ಹಲವರದು ...

ಮಾಲಿನವಿಲ್ಲದೆ ಹರಿಯುತಿಹುದು ನದಿಗಳು, 
ಗಗನದಲ್ಲಿ ರೆಕ್ಕೆ ಬಿಚ್ಚಿ ಉತ್ಸಾಹದಿಂದ 
ಹಾರಡುತ್ತಿರುವ ಹಕ್ಕಿಗಳು, 
ನಲಿಯುತಿಹುದು ಕಾನನ , 
ಉಸಿರಾಡುತಿಹಳು ಧರೆ ... 

ಸ್ತಬ್ಧ ಎಲ್ಲಾ ಸ್ತಬ್ಧ..
ಕರೊನಾದ ಕಾರ್ಮೋಡ ಕರಗುವ ತನಕ ಎಲ್ಲಾ ನಿಶಬ್ಧ 

ನಮಿಸೋಣ ದೇವರಿಗೆ 
ದೇವರಂತಿರುವವರಿಗೆ 🙏🙏🙏
ಹಿಡಿಯೋಣ ಬೀಳುತಿರುವ ಕೈಗಳನು ... 
ಹೆಗಲು ಕೊಡೋಣ ಕಂಬನಿಯ ಕಂಗಳಿಗೆ ..
ಹಂಚೋಣ ಪ್ರೀತಿ , ಪರಿತಪಿಸುತಿರುವ ಹೃದಯಗಳಿಗೆ.. 

ವಿದು ❤️

No comments:

Post a Comment